ನಾಳೆಯಿಂದ ‘ಜಾತ್ರೆ’ ಛಾಲೂ
Posted date: 10 Thu, Dec 2015 – 10:35:35 AM

ಬೆಳದಿದೆ ನೋಡಾ ಬೆಂಗಳೂರು ನಗರ ಎಂದು ಬಹಳ ಹಿಂದೆಯೇ ಹಿರಿಯರು ಹೇಳಿದ್ದಾರೆ. ಇಂತಹ ಸ್ಥಳಕ್ಕೆ ನಮ್ಮ ನಾಯಕ ಹಳ್ಳಿಯಿಂದ ಬರುತ್ತಾನೆ. ನಗರ ಪ್ರದೇಶ ಅವನಿಗೆ ಪ್ರತಿ ನಿತ್ಯವೂ ‘ಜಾತ್ರೆ’ಯಂತೆ ಕಂಡುಬರುತ್ತದೆ. ಇಂತಹ ಸ್ಥಿತಿಯಲ್ಲಿ ಅವನ ಜೀವನ ಹೇಗೆ ಎಂಬುದನ್ನ ನಿರ್ದೇಶಕ ರವಿತೇಜ ಚೊಚ್ಚಲ ನಿರ್ದೇಶನದಲ್ಲಿ ಹಲವು ಆಯಮಗೊಳೊಂದಿಗೆ ಹೇಳಿದ್ದಾರೆ. ‘ಯು’ ಅರ್ಹತಾ ಪತ್ರ ಪಡೆದಿರುವ ಜಾತ್ರೆ ನಾಳೆಯಿಂದ ಛಾಲೂ ಆಗಲಿದೆ!

ನಾಯಕ ಚೇತನ್ ಚಂದ್ರ ಈ ಸಿನಿಮಾದಿಂದ ಚೀತಾ ಚೇತನ್ ಚಂದ್ರ ಆಗಿದ್ದಾರೆ. ನಾಯಕಿ ಐಶ್ವರ್ಯ ನಾಗ್ ಈ ಚಿತ್ರದಲ್ಲಿ ವಾಹಿನಿಯೊಂದರ ಪರ್ತಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿವೆ. ಭಿನ್ನ ಕಥಾ ಹಂದರದ ಸೂಚನೆ ನೀಡುತ್ತಿರುವ ಈ ಚಿತ್ರ ಯಾವಾಗ ತೆರೆ ಕಾಣುತ್ತದೆ ಎಂಬ ಕುತೂಹಲ ನಾಳೆಯಿಂದ ತಣಿಯಲಿದೆ.

ಯು ಆರ್ ಸಿ ಮೂವೀಸ್ ಅಡಿಯಲ್ಲಿ ಶ್ರೀಕಾಂತ್ ಮೋಹನ್ ಬಾವಲೆ ಹಾಗೂ ಕೆ. ರಾಮಸ್ವಾಮಿ ಚಿತ್ರದ ನಿರ್ಮಾಪಕರುಗಳು. ಮಣಿಕಾಂತ್ ಖದ್ರಿ ಅವರ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣ, ತ್ರಿಭುವನ್ ನೃತ್ಯ, ಕೆ ಎಂ ಪ್ರಕಾಶ್ ಸಂಕಲನ ಮಾಡಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed